ಆಪದ್ಬಂಧವುಡು (ಅನುವಾದಃ ಆಪತ್ತಿನಲ್ಲಿ ನೆರವಾಗುವ ರಕ್ಷಕ) ಕೆ. ವಿಶ್ವನಾಥ್ ಬರೆದ ಮತ್ತು ನಿರ್ದೇಶಿಸಿದ 1992ರ ಭಾರತೀಯ ತೆಲುಗು ಭಾಷೆಯ ಚಲನಚಿತ್ರ. ಎಡಿಡಾ ನಾಗೇಶ್ವರ ರಾವ್ ಅವರ ಪೂರ್ಣೋದಯ ಮೂವಿ ಕ್ರಿಯೇಷನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಚಿರಂಜೀವಿ ಮತ್ತು ಮೀನಾಕ್ಷಿ ಶೇಷಾದ್ರಿ ನಟಿಸಿದ್ದಾರೆ . ಇದರಲ್ಲಿ ಜಂಧ್ಯಾಲ, ಶರತ್ ಬಾಬು ಮತ್ತು ಗೀತಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಶುಭಲೇಖ (1982) ಮತ್ತು ಸ್ವಯಂ ಕೃಷಿ (1987) ನಂತರ ಚಿರಂಜೀವಿ ಮತ್ತು ವಿಶ್ವನಾಥ್ ಅವರ ಮೂರನೇ ಸಿನಿಮಾ. ಈ ಚಿತ್ರವು ಐದು ನಂದಿ ರಾಜ್ಯ ಪ್ರಶಸ್ತಿಗಳೊಂದಿಗೆ ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿತು. ಇದರಲ್ಲಿ ಚಿರಂಜೀವಿಗೆ ಅತ್ಯುತ್ತಮ ನಟನೆಗಾಗಿ ನಂದಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟನೆಂದು ಫಿಲ್ಮ್ಫೇರ್ ಪ್ರಶಸ್ತಿ-ತೆಲುಗು ನೀಡಲಾಯಿತು. ಈ ಚಲನಚಿತ್ರವು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಏಷ್ಯಾ ಪೆಸಿಫಿಕ್ ಚಲನಚಿತ್ರೋತ್ಸವ ಮತ್ತು ಎಐಎಸ್ಎಫ್ಎಂ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರವನ್ನು ನಂತರ ಡಬ್ ಮಾಡಿ ತಮಿಳು ಭಾಷೆಗೆ ವೀರ ಮರುದು ಎಂದು ಬಿಡುಗಡೆ ಮಾಡಲಾಯಿತು. == ಕಥಾವಸ್ತು == ಮಾಧವನು ಹೇಮಾ ಮತ್ತು ಆಕೆಯ ತಂದೆಗೆ ನಿಷ್ಠಾವಂತ ಸ್ನೇಹಿತ, ಸೇವಕ ಮತ್ತು ಗೋಪಾಲಕ. ಆತ ಸ್ಥಳೀಯ ನಾಟಕಗಳಲ್ಲಿಯೂ ಅಭಿನಯಿಸುತ್ತಾನೆ. ಅದರಲ್ಲಿ ಆತ ಶಿವನ ಪಾತ್ರವನ್ನು ನಿರ್ವಹಿಸುತ್ತಾನೆ. ಹೇಮಾ ಅವರ ತಂದೆ ಶಾಲಾ ಶಿಕ್ಷಕ ಮತ್ತು ಪ್ರತಿಭಾವಂತ ಕವಿಯಾಗಿದ್ದಾರೆ. ಆದಾಗ್ಯೂ ಅವರ ಶಾಸ್ತ್ರೀಯ ಕವಿತೆಗಳು ಇನ್ನು ಜನಪ್ರಿಯವಾಗಿಲ್ಲವಾದ್ದರಿಂದ ಅವರ ಕವಿತೆಗಳನ್ನು ಮುದ್ರಿಸಲು ಅವರಿಗೆ ಪ್ರಕಾಶಕರೊಬ್ಬ ಸಿಕ್ಕಿರಲಿಲ್ಲ . ಹೇಮಾ ಮತ್ತು ಮಾಧವ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರೂ ಅವರ ಹಳ್ಳಿಯಲ್ಲಿನ ಜಾತಿ ಮತ್ತು ಆರ್ಥಿಕ ವರ್ಗದ ಸಾಮಾಜಿಕ ವಿಭಜನೆಯಿಂದಾಗಿ ಇದು ಅವರಿಗೇ ತಿಳಿದಿಲ್ಲ. ಹೇಮಾ ತಾನು ಪಾರ್ವತಿ ಪಾತ್ರವನ್ನು ನಿರ್ವಹಿಸುವ ನಾಟಕದ ಸಮಯದಲ್ಲಿ ಮೊದಲ ಬಾರಿಗೆ ಅವನ ಮೇಲಿನ ತನ್ನ ಪ್ರೀತಿಯನ್ನು ಅರಿತುಕೊಂಡಳು. ಆದರೆ ಸಾಮಾಜಿಕ ಕಳಂಕದಿಂದಾಗಿ ಅವಳ ಭಾವನೆಗಳನ್ನು ನಿಗ್ರಹಿಸುತ್ತಾಳೆ. ಒಂದು ದಿನ ಹೇಮಳ ಅಕ್ಕ ಲಲಿತಳ ಮದುವೆಯ ಖರ್ಚನ್ನು ಭರಿಸುವ ಸಲುವಾಗಿ ಮಾಧವನು ತನ್ನ ಹಸುಗಳನ್ನು ಮಾರಿ ಆ ಹಣವನ್ನು ಕುಟುಂಬದ ಸ್ನೇಹಿತನ ಮೂಲಕ ಹೇಮಳ ತಂದೆಗೆ ಸಾಲವಾಗಿ ನೀಡುತ್ತಾನೆ. ಹೇಮಳ ತಂದೆ ಈ ಕೃತ್ಯವನ್ನು ತಿಳಿದು ತನ್ನ ಹಸ್ತಪ್ರತಿಗಳನ್ನು ಮುದ್ರಿಸಲು ಮಾಧವನಿಗೆ ಕೊಡುತ್ತಾನೆ. ಮಾಧವನು ಅವುಗಳನ್ನು ಮುದ್ರಿಸಲು ಪಟ್ಟಣಕ್ಕೆ ಹೋಗುತ್ತಾನೆ. ಆದರೆ ಅವನು ಹಿಂದಿರುಗಿದಾಗ ಹೇಮಳನ್ನು ಮಾನಸಿಕ ಆಶ್ರಮಕ್ಕೆ ಕರೆದೊಯ್ಯುವುದನ್ನು ಅವನು ನೋಡುತ್ತಾನೆ. ಆತನಿಗೆ ಹೇಮನ ಪ್ರಸ್ತುತ ಮಾನಸಿಕ ಸ್ಥಿತಿಗೆ ಕಾರಣವಾದ ಘಟನೆಯ ಬಗ್ಗೆ ಅಂದರೆ ಹೇಮನ ಸೋದರ ಮಾವನ ಅತ್ಯಾಚಾರ ಪ್ರಯತ್ನ ಮತ್ತು ಲಲಿತಳ ಸಾವಿನ ಬಗ್ಗೆ ತಿಳಿಯುತ್ತದೆ. ಮಾಧವನು ಮಾನಸಿಕವಾಗಿ ಅಸ್ಥಿರನಾಗಿದ್ದಾನೆಂದು ನಟಿಸುತ್ತಾನೆ ಮತ್ತು ಅದೇ ಆಶ್ರಮಕ್ಕೆ ಪ್ರವೇಶಿಸುತ್ತಾನೆ , ಅಲ್ಲಿ ಅವನು ಹೇಮೆಯನ್ನು ಉಳಿಸಲು ಅನೇಕ ಕಷ್ಟಗಳನ್ನು ಎದುರಿಸುತ್ತಾನೆ. ಆಕೆಯ ಮೇಲೆ ದಾಳಿ ಮಾಡದಂತೆ ಕಾವಲುಗಾರನನ್ನು ತಡೆದ ನಂತರ ಆತನ ಮೇಲೆ ಅತ್ಯಾಚಾರ ಯತ್ನದ ಸುಳ್ಳು ಆರೋಪ ಹೊರಿಸಲಾಗುತ್ತದೆ ಮತ್ತು ಶಾಕ್ ಟ್ರೀಟ್ಮೆಂಟ್ ನೀಡಲಾಗುತ್ತದೆ. ಹೇಮಳು ಆಕೆಯ ನೆನಪುಗಳನ್ನು ಮರಳಿ ಪಡೆಯುವಂತೆ ಮಾಡಲು ಆತ ಅನೇಕ ಬಾರಿ ಪ್ರಯತ್ನಿಸುತ್ತಾನೆ. ಅಂತಿಮವಾಗಿ ಅವಳಿಗೆ ತನ್ನ ಹಳೆಯ ನೆನಪುಗಳು ಮರಳಿದಾಗ ಮತ್ತು ಮಾಧವ ತನಗಾಗಿ ಏನು ಮಾಡಿದ್ದಾನೆಂದು ತಿಳಿದಾಗ ಅವಳು ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ನಂತರ ಅವನನ್ನು ಮದುವೆಯಾಗಲು ಬಯಸುತ್ತಾಳೆ. ಆದಾಗ್ಯೂ ಮಾಧವನು ಸಮಾಜದ ಕೆಳ ವರ್ಗದವನಾಗಿದ್ದರಿಂದ ಆಕೆಯ ಪ್ರಸ್ತಾಪವನ್ನು ವಿರೋಧಿಸುತ್ತಾನೆ. ಹೇಮಳನ್ನು ಮದುವೆಯಾಗಲು ನಿಶ್ಚಿತವಾಗುವ ವರ ಶ್ರೀಪತಿ ಮಾಧವನ ಮನಸ್ಸನ್ನು ಬದಲಾಯಿಸುವಂತೆ ಮನವೊಲಿಸುತ್ತಾನೆ. ಹೇಮಾ ಮತ್ತು ಮಾಧವ ಒಂದಾಗುವೊಂದಿಗೆ ಚಿತ್ರ ಮುಗಿಯುತ್ತದೆ. == ಪಾತ್ರವರ್ಗ == == ಸಂಗೀತ == ಎಲ್ಲಾ ಹಾಡುಗಳಿಗೆ ಎಂ. ಎಂ. ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಧ್ವನಿಮುದ್ರಣವನ್ನು ಲಹರಿ ಮ್ಯೂಸಿಕ್ ಹೊಂದಿದೆ. == ಪ್ರಶಸ್ತಿಗಳು == ನಂದಿ ಪ್ರಶಸ್ತಿಗಳು ಮೂರನೇ ಅತ್ಯುತ್ತಮ ಚಲನಚಿತ್ರ-ಕಂಚು-ಎಡಿಡಾ ನಾಗೇಶ್ವರ ರಾವ್ ಅತ್ಯುತ್ತಮ ನಟ-ಚಿರಂಜೀವಿ ಅತ್ಯುತ್ತಮ ಸಂಭಾಷಣೆ ಬರಹಗಾರ-ಜಂಧ್ಯಾಲ ಅತ್ಯುತ್ತಮ ಕಲಾ ನಿರ್ದೇಶಕ ಬಿ. ಚಲಮ್ ಮತ್ತು ಅರುಣ್ ಡಿ ಘೋಡ್ಗಾವ್ಕರ್ ಅತ್ಯುತ್ತಮ ನೃತ್ಯ ಸಂಯೋಜಕ-ಭೂಷಣ್ ಲಖಂದ್ರಿ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿ-ತೆಲುಗು-ಚಿರಂಜೀವಿ ಅತ್ಯುತ್ತಮ ನಿರ್ದೇಶಕ ಫಿಲ್ಮ್ಫೇರ್ ಪ್ರಶಸ್ತಿ-ತೆಲುಗು-ಕೆ. ವಿಶ್ವನಾಥ್ ಫಿಲ್ಮ್ಫೇರ್ ಪ್ರಶಸ್ತಿ ದಕ್ಷಿಣ ನಾಮನಿರ್ದೇಶನ ಅತ್ಯುತ್ತಮ ನಟಿ-ತೆಲುಗು ಚಿತ್ರ ಆಪದಬಂಧುವು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == @ ಐ ಎಮ್ ಡಿ ಬಿ ಟೆಂಪ್ಲೇಟು: Viswanathಟೆಂಪ್ಲೇಟು: